ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಬ್ಲಾಕ್ ಮನಿ ಹೂಡಿಕೆ ತಡೆಯು ವುದು ಹೇಗೆ . . .??!!!****



ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಬ್ಲಾಕ್ ಮನಿ ಹೂಡಿಕೆ ತಡೆಯು ವುದು ಹೇಗೆ ??!!!****

ಪ್ರಸ್ತುತ ಭಾರತದಲ್ಲಿ, ಭಾರತೀಯರು ವಿದೇಶಿ ಬ್ಯಾಂಕುಗಳಲ್ಲಿ ಅಡಗಿಸಿರುವ ಅಗಾಧ ಪ್ರಮಾಣದ ಕಪ್ಪು ಹಣವನ್ನು ಭಾರತಕ್ಕೆ ಮರಳಿ ತರುವ ಬಗ್ಗೆ ಚರ್ಚೆ ಬಿಸಿಬಿಸಿಯಾಗಿ ನಡೆಯುತ್ತಿದೆ.. . . . ಮತ್ತೆ ಕೆಲವರು ಭಾರತದಲ್ಲೆ ಚಲಾವಣೆಯಲ್ಲಿ ಇರುವ ಮೂದಲು ಹೊರ ತರುವ ಕಾರ್ಯವಾಗಬೇಕೆಂದು ಅಗ್ರಹಿಸುತ್ತಿದ್ದಾರೆ. . .

ಆದರೆ ಸಾಮಾನ್ಯ ಜನರಿಗೆ ಕಪ್ಪು ಹಣದ ಕಥೆ ಇರಲಿ, ದಿನದೂಡಲು ಅಗತ್ಯವಾದ ಹಣವನ್ನು ಹೊಂದಿಸಲು ಹರಸಾಹಸ ಪಡುತ್ತಿದ್ದಾರೆ. .  . ನಾವು ಕಪ್ಪು ಹಣದ ಬಗ್ಗೆ ಮೊದಲು ಮಾತನಾಡುವ ಮುನ್ನ ‘ ಕಪ್ಪು ಹಣ’ ದ ಅರ್ಥ ಮಾಡಿಕೊಳ್ಳುವುದು ಒಳ್ಳೆಯದು.



ಸರಳವಾಗಿ ಹೇಳುವುದಾದರೆ, ಯಾವುದೇ ಹಣ ದೇಶದಲ್ಲಿ ಚಾಲ್ತಿಯಲ್ಲಿರುವ ತೆರಿಗೆಗಳನ್ನು ಪಾವತಿಸದೆ ವಂಚನೆ ಮಾಡಿ ಗಳಿಸಿದ ಹಣವಾಗಿರುತ್ತದೆ. . . . ಭಾರತದಲ್ಲಿ ಈ ಹಣವನ್ನು ಅಡಗಿಸಿಟ್ಟರೆ ತೆರಿಗೆ ಇಲಾಖೆಯು ಯಾವಾಗಲಾದರೂ ದಾಳಿ ನಡೆಸಬಹುದು ಎನ್ನುವ ಕಾರಣದಿಂದ ಮತ್ತು ವಿದೇಶಗಳ ಬ್ಯಾಂಕಿಗ್ ನಿಯಮಗಳು ಅಡಗಿಸಿಟ್ಟ ಕಪ್ಪು ಹಣದ ಗುಟ್ಟನ್ನು ಕಾಪಾಡಿಕೊಳ್ಳುವ ಕಾನೂನುಗಳನ್ನು ಹೊಂದಿರುವ ಕಾರಣದಿಂದ ವಿದೇಶಿ ಬ್ಯಾಂಕ್‍ಗಳಲ್ಲೆ ಠೇವಣಿ ಇಡುವುದು ಸುರಕ್ಷಿತವೆಂದು ಅಲ್ಲಿಯ ಬ್ಯಾಂಕುಗಳಲ್ಲೆ ಠೇವಣಿ ಮಾಡಿದರು.

ಆದರೆ ಕೆಲವರು ವಿದೇಶಗಳಲ್ಲಿ ಠೇವಣಿ ಮಾಡದೆ, ಅದಕ್ಕಿಂತ ಸುರಕ್ಷಿತವಾದ ಭಾರತದ ರಿಯಲ್ ಎಸ್ಟೇಟ್ ನಲ್ಲಿ ಹೊಡಿಕೆ ಮಾಡತೊಡಗಿದರು. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಭೂಮಿಯನ್ನು ಕೊಳ್ಳುವ, ಮಾರುವ, ಅಭಿವೃದ್ದಿ ಪಡಿಸುವ ಮತ್ತು ಅಭಿವೃದ್ದಿಪಡಿಸಿದ್ದನ್ನು ಮಾರುವ ಕೆಲಸಗಳು ಒಳಗೊಳ್ಳುತ್ತವೆ ಮತ್ತು ಭಾರತದಲ್ಲಿನ ನಗರಗಳ ಭೂಮಿಯ ಬೆಲೆ ದಿನೇ ದಿನೇ ಎರಿಕೆಯಾಗುತ್ತಿರುವುದು, ಹೂಡಿಕೆಯಾದ ಹಣಕ್ಕೆ ಬದಲಾಗಿ ಹಲವು ಪಟ್ಟು ಲಾಭ ಗಳಿಸುವ ಅವಕಾಶ ಕಲ್ಪಿಸಿದ್ದರಿಂದ, ಸ್ವಲ ಹಣ ಇರುವವರು ಮತ್ತು ಇಲ್ಲದೆ ಇರುವವರು ಕೂಡ ಕೋಟಿಗಟ್ಟಲೆ ಹಣ ಮಾಡಲು ಶುರು ಮಾಡಿದರು, ಆದ್ದುದರಿಂದ ಕಪ್ಪು ಹಣ ಹೊಂದಿರುವ ಸಿರಿವಂತರು ಕೂಡ ತಮ್ಮ ಹಣದ ಸುರಕ್ಷಿತ ಹೂಡಿಕೆಗಾಗಿ ಮತ್ತು ಹಲವು ಪಟ್ಟು ಹಣ ಗಳಿಸಲು ತಮ್ಮ ಹಣವನ್ನು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಸಲು ಶುರುಮಾಡಿದರು.

ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಈ ಪರಿಯ ಹಣ ಮಾಡಲು ಮತ್ತು ಕಪ್ಪು ಹಣದ ಹೂಡಿಕೆಗೆ ಸುರಕ್ಷಿತ ತಾಣವಾಗಲು ಮುಖ್ಯ ಕಾರಣ ಸರ್ಕಾರ ನಿಗದಿಪಡಿಸಿರುವ ಮಾರುಕಟ್ಟೆ ದರ ಮತ್ತು ಕೊಳ್ಳುವ ಮತ್ತು ಮಾರುವವರ ನಡುವೆ ನಿಗದಿಯಾಗುತ್ತಿರುವ ದರಗಳಲ್ಲಿ ಹಲವು ಪಟ್ಟು ವ್ಯತ್ಯಾಸ ಇರುವುದು, ಖರೀದಿ ಮಾಡಿದ ಸ್ವತ್ತನ್ನು ಮರು ಮಾರಾಟ ಮಾಡಿದಾಗ ಸರ್ಕಾರ ನಿಗದಿಪಡಿಸಿರುವ ಮಾರುಕಟ್ಟೆ ದರದಲ್ಲಿ ಹೆಚ್ಚಾಗಿದ್ದರೆ ಮಾತ್ರ ಹೆಚ್ಚಾದ ದರ ಮಾತ್ರ ಆದಾಯ ತೆರಿಗೆಗೆ ಒಳಪಡುತ್ತಿದ್ದು, ಸರ್ಕಾರ ದರ ಪರಿಷ್ಕರಿಸದೆ ಇರುವ ವೇಳೆ ಕೊಳ್ಳುವಾಗ ತೋರಿಸಿದ ದರವನ್ನೆ ಮರು ಮಾರಾಟ ಮಾಡುವ ವೇಳೆ ಕೂಡ ತೋರಿಸಲಾಗುವುದರಿಂದ, ತೆರಿಗೆ ಇಲಾಖೆಯು ಕೂಡ ಇದನ್ನೆ ಮಾನ ದಂಡವಾಗಿ ಪರಿಗಣಿಸುವ ಕಾರಣದಿಂದ ರಿಯಲ್ ಎಸ್ಟೇಟ್ ಉದ್ಯಮಿಯು ತಾನು ಪಡೆದ ಸಂಪೂರ್ಣ ಫಲವನ್ನು ಯಾವುದೇ ತೆರಿಗೆ ಕಟ್ಟದೆ ಅನುಭವಿಸುವ ಸೌಕರ್ಯ/ಅನುಕೂಲ ಈ ಕ್ಷೇತ್ರದಲ್ಲಿ ಮಾತ್ರ ಕಂಡುಬರುತ್ತದೆ.

ಉದಾಹರಣೆಗೆ : ಪ್ರಸ್ತುತ ಕರ್ನಾಟಕ ಸರ್ಕಾರವು ನಿಗದಿಪಡಿಸಿರುವ ಮಾರುಕಟ್ಟೆ ದರದ ಪ್ರಕಾರ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರುಗಳ ಹುಣಸಮಾರನಹಳ್ಳಿ ಜಮೀನುಗಳಿಗೆ 2013ರಲ್ಲಿ ರೂ.2000/- ಪ್ರತಿ ಚದರ ಅಡಿಗೆ ನಿಗದಿಪಡಿಸಿತ್ತು, ಆ ಜಾಗಕ್ಕೆ ಮುಕ್ತಮಾರುಕಟ್ಟೆಯಲ್ಲಿ 2013 ರಲ್ಲಿ ಪ್ರತಿ ಚದರ ಅಡಿಗೆ ರೂ.6,000/- ದಿಂದ ರೂ.7,000/- ಬೆಲೆಯಲ್ಲಿ ಬೀಕರಿಯಾಗುತ್ತಿತ್ತು. ಆ ಜಾಗzಲ್ಲಿ ಯಾವುದೇ ವ್ಯಕ್ತಿ ಸುಮಾರು 10,000 ಚದರ ಅಡಿ ಜಾಗ ಖರೀದಿ ಮಾಡಿದರೆ ಆತ ಕನಿಷ್ಠ ರೂ.6,000/- ಪ್ರತಿ ಚದರ ಅಡಿಗೆ ಮಾರಾಟಗಾರನಿಗೆ ಕೊಟ್ಟರೂ ಕೂಡ ಆತ ಸರ್ಕಾರ ನಿಗದಿಪಡಿಸಿರುವ ರೂ.2,000 ರಂತೆ 10,000 ಚದರ ಅಡಿಗೆ ರೂಪಾಯಿ 2,00,00,000/- ಬೆಲೆಗೆ ಮಾರಾಟವಾದಂತೆ ಕ್ರಯಪತ್ರದಲ್ಲಿ ತೋರಿಸಿ ಅದೆ ಮೌಲ್ಯಕ್ಕೆ ಮುದ್ರಾಂಕ ಶುಲ್ಕ ಮತ್ತು ನೋಂದಣಿ ಶುಲ್ಕ ಗಳನ್ನು ಸರ್ಕಾರಕ್ಕೆ ಪಾವತಿಸುತ್ತಾನೆ ಮತ್ತು ಉಳಿಕೆ ಕ್ರಯದ ಹಣವಾದ 4 ಕೋಟಿ ನಗದಾಗಿ ನೀಡುತ್ತಾನೆ. . . ಆ ಹಣದ ಪಾವತಿಯು ಸರ್ಕಾರದ ಗಮನಕ್ಕೆ ಬಾರದೆ ನಡೆಯುವುದರಿಂದ ಈ ಹಣದ ವ್ಯವಹಾರವು ಕಪ್ಪು ಹಣದ ರೂಪದಲ್ಲೆ ನಡೆಯುತ್ತದೆ.  

ಈ ವ್ಯವಹಾರವನ್ನು ತೆರಿಗೆ ಕಾನೂನಿನಡಿ ನೋಡುವುದಾದರೆ, ಈ ವ್ಯವಹಾರದಲ್ಲಿ ಸ್ವತ್ತಿನ ಮಾರಾಟಗಾರ ಕ್ರಯಪತ್ರದಲ್ಲಿ ತೋರಿಸಿದ ರೂ.2,00,00,000/- ಕ್ಕೆ ಮಾತ್ರ ತೆರಿಗೆ ಕಾನೂನಿನಡಿ ತೆರಿಗೆ ಪಾವತಿಸಲು ಬಾದ್ಯನಾಗುತ್ತಾನೆ ಮತ್ತು ನಗದಾಗಿ ಸ್ವೀಕರಿಸಿದ 4 ಕೋಟಿ ರೂಪಾಯಿಗಳಿಗೆ ಕಟ್ಟಬೇಕಾದ ತೆರಿಗೆಯಿಂದ ತಪ್ಪಿಸಿಕೊಳ್ಳುತ್ತಾನೆ, ಅಂದಾಜು 20% ಕ್ಯಾಪಿಟೆಲ್ ಗೆಯ್ನ್ ತೆರಿಗೆಯನ್ನು ಸರಳವಾಗಿ ಅಳವಡಿಸಿಕೊಂಡು ಲೆಕ್ಕಹಾಕಿದರೂ ಕೂಡ 80 ಲಕ್ಷದಷ್ಟು ಹಣಕ್ಕೆ ತೆರಿಗೆ ಪಾವತಿಯಿಂದ ತಪ್ಪಿಸಿಕೊಂಡಿರುತ್ತಾನೆ.

ಇದರ ಜೊತೆಗೆ, ಖರೀದಿದಾರ ಕೂಡ ಕ್ರಯಪತ್ರದಲ್ಲಿ ನಮೋದಿಸಿದ ರೂ.2,00,00,000/- ಕ್ಕೆ ಮಾತ್ರ ಹಣದ ಮೂಲ ತೋರಿಸಿದರೆ ಸಾಕಾಗುತ್ತದೆ. 4 ಕೋಟಿ ರೂಪಾಯಿಯ ಹಣದ ಮೂಲವನ್ನೆ ತೋರಿಸಬೇಕಾದ ಪ್ರಮೇಯವೇ ಬರುವುದಿಲ್ಲ.

ತದನಂತರ, ಖರೀದಿದಾರ 2014ರಲ್ಲಿ ಮಾರಾಟ ಮಾಡಿದರೆ, ಸರ್ಕಾರ ಮಾರುಕಟ್ಟೆ ದರ ಪರಿಷ್ಕರಿಸಿ ನಿಗದಿ ಮಾಡಿದ ಪ್ರಕಾರ ಪ್ರತಿ ಚದರ ಅಡಿಗೆ 2,200/- ರಂತೆ ಕ್ರಯ ಪತ್ರದಲ್ಲಿ ತೋರಿಸಿ ಅದೆ ಮೌಲ್ಯಕ್ಕೆ ಮುದ್ರಾಂಕ ಶುಲ್ಕ ಮತ್ತು ನೋಂದಣಿ ಶುಲ್ಕ ಗಳನ್ನು ಸರ್ಕಾರಕ್ಕೆ ಪಾವತಿಸುತ್ತಾನೆ. ಆದರೆ ಆತನು ಖರೀದಿದಾರನಿಗೆ ಪ್ರತಿ ಚದರ ಅಡಿಗೆ ಸುಮಾರು 8,000/- ದಂತೆ ಮಾರಾಟ ಮಾಡಿರುತ್ತಾನೆ ಎಂದಿಟ್ಟುಕೊಂಡರೂ ಕೂಡ ತನ್ನ 4 ಕೋಟಿ ಕಪ್ಪು ಹಣಕ್ಕೆ ಹೂಡಿಕೆ ಜೊತೆಗೆ 1 ಕೋಟಿ 80 ಲಕ್ಷದಷ್ಟು ಹಣವನ್ನು ಕ್ರಯದಾರನಿಂದ ನಗದಾಗಿ (ಕಪ್ಪುಹಣ) ಪಡೆದಿರುತ್ತಾನೆ. ಆದರೆ ಸರ್ಕಾರಕ್ಕೆ ಈ ವ್ಯವಹಾರದಿಂದ ಕೇವಲ 20 ಲಕ್ಷದಷ್ಟು ಹಣ ಮಾತ್ರ ಲಾಭ ಪಡೆದಿರುವುದಾಗಿ ತೋರಿಸುತ್ತಾನೆ ಮತ್ತು ಆ ಹಣಕ್ಕೆ ಮಾತ್ರ ತೆರಿಗೆ ಕಟ್ಟಲು ಬಾದ್ಯನಾಗುತ್ತಾನೆ ಮತ್ತು ಬಾಕಿ ಹಣ 4 ಕೋಟಿ ಹಣದ ಮೇಲೆ ಪಡೆದ ಲಾಭ 1 ಕೋಟಿ 80 ಲಕ್ಷಕ್ಕೆ ಯಾವುದೇ ರೀತಿಯಲ್ಲಿಯೂ ತೆರಿಗೆ ಪಾವತಿ ಮಾಡಬೇಕಾಗಿರುವುದಿಲ್ಲ. ಈ ಕೆಳಗೆ ನೀಡಿರುವ ಕೋಷ್ಟಕ ಕಪ್ಪು  ಬೇರೆ ಬೇರೆ ಸಂದರ್ಭಗಳಲ್ಲಿ ಹಣ ಹೇಗೆ ವೃದ್ದಿಯಾಗುತ್ತದೆ ಎಂದು ತಿಳಿಸುತ್ತದೆ



2013
2014
ಮಾರುಕಟ್ಟೆ ದರ
ಕ್ರಯಪತ್ರದಲ್ಲಿ ತೋರಿಸಿದ ಮತ್ತು ನೀಡಿದ ಹಣ
ನಗದಾಗಿ ನೀಡಿದ ಕಪ್ಪು ಹಣ
ಪರಿಷ್ಕ್ರತ ಮಾರುಕಟ್ಟೆ ದರ
ಕ್ರಯಪತ್ರದಲ್ಲಿ ತೋರಿಸಿದ ಮತ್ತು ಪಡೆದ ಹಣ ನಗದಾಗಿ ಪಡೆದ ಕಪ್ಪು ಹಣ
2,000/- ಪ್ರತಿ ಚದರ ಅಡಿ
2,00,00,000/-
4,00,00,000/-
2,200/-
2,20,00,000/-
5 ಕೋಟಿ 80 ಲಕ್ಷ

ಈ ರೀತಿ ತೆರಿಗೆ ವಂಚನೆ ಮಾಡಲು ಅನುಕೂಲವಿರುವ ಮತ್ತು ಅಗಾಧ ಪ್ರಮಾಣದಲ್ಲಿ ಹಣ ಮಾಡಲು ಅವಕಾಶವಿರುವ ಕ್ಷೇತ್ರ ಬಹುಶಃ ರಿಯಲ್ ಎಸ್ಟೇಟ್ ಮಾತ್ರ. ಆದುದರಿಂದ ಈ ಕ್ಷೇತ್ರವು ಕಾಳಧನ ಹೊಂದಿರುವ ಶ್ರೀಮಂತರನ್ನು, ಲಂಚಬಾಕ ಅಧಿಕಾರಿಗಳನ್ನು ಕೈಬೀಸಿ ಕರೆಯುತ್ತಿದೆ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಸಾಮಾನ್ಯರೂ ಕೂಡ ನೀವೇಶನ, ಅಪಾರ್ಟಮೆಂಟ್ ಖರೀದಿಮಾಡಿದರೂ ಕೂಡ ದೊಡ್ಡ ದೊಡ್ಡ ಹೂಡಿಕೆಗಳನ್ನು ಕಾಳಧನ ಹೊಂದಿರುವವರು ಮತ್ತು ಲಂಚಬಾಖ ಅಧಿಕಾರಿಗಳು ಮಾಡುತ್ತಿದ್ದಾರೆ ಮತ್ತು ತಮ್ಮ ಅಪಾರವಾದ ಕಾಳಧನವು ಕಾನೂನಿಡಿಯಲ್ಲಿಯೇ ರೂಪಿಸಿದ ನೀತಿ ನಿಯಮಗಳನ್ವಯ ಹೂಡಿಕೆ ಯಾಗಿರುವ ಕಾರಣ ತಮ್ಮ ಕಾಳಧನದ ಹೂಡಿಕೆಗೆ ಸೂಕ್ತ ರಕ್ಷಣೆಯ ಜೊತೆಗೆ ಅಪಾರ ಪ್ರಮಾಣದ ಲಾಭ ಕೂಡ ಳಿಸುತ್ತಿದ್ದಾರೆ.  

ಈ ರೀತಿ ಲಾಭ ಮಾಡಿಕೊಳ್ಳಲು ಸರ್ಕಾರಗಳು ನಿರೂಪಿಸಿರುವ ಕಾನೂನುಗಳು ಕೂಡ ಕಪ್ಪು ಹಣದ ಚಲಾವಣೆಗೆ, ಹೂಡಿಕೆಗೆ ಮತ್ತು ಲಾಭ ಪಡೆಯಲು ಈ ಕೆಳಕಂಡಂತೆ ಸಹಕಾರಿಯಾಗಿರುತ್ತವೆ.

1.    ಸರ್ಕಾರ ಪ್ರಸ್ತುತ ನಿಗದಿ ಪಡಿಸಿರುವ / ಪಡಿಸುವ ಮಾರುಕಟ್ಟೆ ದರ ಮತ್ತು ಖರೀದಿದಾರ ಮತ್ತು ಮಾರಾಟಗಾರ ನಡುವೆ ವ್ಯವಹರಿಸುವ ಮುಕ್ತ ಮಾರುಕಟ್ಟೆ ದರದಲ್ಲಿ ಅಜಗಜಾಂತರ ವ್ಯತ್ಯಾಸವಿರುವುದು.

2.    ಸರ್ಕಾರ ನಿಗದಿಗೊಳಿಸಿರುವ ಮುದ್ರಾಂಕ ಮತ್ತು ನೋಂದಣಿ ಶುಲ್ಕ ಜಾಸ್ತಿ ಇರುವುದರಿಂದ, ಅದನ್ನು ಪಾವತಿ ಮಾಡುವುದರಿಂದ ತಪ್ಪಿಸಿಕೊಳ್ಳಲು ಹೆಚ್ಚಿನ ದರದಲ್ಲಿ ವ್ಯವಹಾರ ಮಾಡಿದ್ದರೂ ಕೂಡ ಸರ್ಕಾರ ನಿಗದಿ ಪಡಿಸಿದ ಮಾರುಕಟ್ಟೆದರದಲ್ಲೇ ನೋಂದಣಿ ಮಾಡಿಸಿಕೊಳ್ಳಲು ಖರೀದಿದಾರ ಒಲವು ತೋರುತ್ತಾನೆ ಮತ್ತು ಹೆಚ್ಚಿನ ಆದಾಯ ತೆರಿಗೆ ಪಾವತಿಯಿಂದ ತಪ್ಪಿಸಿಕೊಳ್ಳಲು ಮಾರಾಟಗಾರ ಅದಕ್ಕೆ ಒಪ್ಪಿಗೆ ನೀಡುತ್ತಾನೆ,

3.    ಕೇಂದ್ರ ಸರ್ಕಾರ ಕೂಡ ರಾಜ್ಯ ಸರ್ಕಾರ ನಿಗದಿಪಡಿಸಿದ ಮಾರುಕಟ್ಟೆ ದರದಲ್ಲಿ ಕ್ರಯ ಮಾಡಿಸಿದಾಗ ಅದನ್ನು ವಿಧಿಯಿಲ್ಲದೆ ಒಪ್ಪಿಕೊಳ್ಳಬೇಕಾಗುತ್ತದೆ.

ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಕಪ್ಪು ಹಣದ ಬಳಕೆಯನ್ನು ತಡೆಯಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಈ ಕೆಳಕಂಡ ತಿದ್ದುಪಡಿಗಳನ್ನು ಅತಂತ್ಯ ಜರೂರಾಗಿ ಮಾಡಬೇಕಾಗಿರುತ್ತದೆ.

ಮೋದಲನೇಯದಾಗಿ, ರಾಜ್ಯ ಸರ್ಕಾರಗಳು ಮಾರುಕಟ್ಟೆ ದರವನ್ನು ಹೆಚ್ಚಳ ಮಾಡಿದಾಗ ಜನರಿಂದ ಮತ್ತು ಡೆವಲಪರ್ಸ್‍ಗಳಿಂದ ಫ್ರತಿಭಟನೆ ಎದುರಿಸಬೇಕಾಗುತ್ತದೆ ಎನ್ನುವ ಕಾರಣದಿಂದ ಮಾರುಕಟ್ಟೆದರದಲ್ಲಿ 400% ಹೆಚ್ಚಳವಾಗಿದ್ದರೂ ಮತ್ತು ಅದು ಸರ್ಕಾರಕ್ಕೆ ಗೊತ್ತಿದ್ದರೂ ಕೂಡ ಅದು ಹೆಚ್ಚಳದ ಗರಿಷ್ಠ ಮಟ್ಟವನ್ನು 100% ಗಿಂತ ಜಾಸ್ತಿ ಹೆಚ್ಚಳ ಮಾಡಲು ಹಿಂದೇಟು ಹಾಕುತ್ತದೆ. ಉದಾಹರಣೆಗೆ ಕರ್ನಾಟಕದಲ್ಲಿರುವ ಪ್ರಸ್ತುತ ಮುಕ್ತ ಮಾರಟ ದರಕ್ಕೆ ದರಗಳನ್ನು ನಿಗದಿ ಮಾಡಿ ಈಗ ಇರುವ 5.6% ರಷ್ಟು ಮುದ್ರಾಂಕ ಶುಲ್ಕವನ್ನು ಮತ್ತು 1% ನೋಂದಣಿ ಶುಲ್ಕವನ್ನು ಮುಕ್ತ ಮಾರಾಟ ದರಕ್ಕೆ ಅನುಗುಣವಾಗಿ ಹೊಂದುವಂತೆ ಕಡಿಮೆಗೊಳಿಸಬೇಕು.

ಉದಾಹರಣೆಗೆ, ಮೇಲ್ಕಂಡ ಹುಣಸಮಾರನಹಳ್ಳಿ ಜಮೀನಿಗೆ 2013 ರಲ್ಲಿ ಪ್ರತಿ ಚದರ ಅಡಿಗೆ 6000 ರೂಪಾಯಿ ಮಾರುಕಟ್ಟೆ ದರ ನಿಗದಿ ಪಡಿಸಿದ್ದರೆ, ಮತ್ತು 1/3 ಭಾಗದಷ್ಟು ಮುದ್ರಾಂಕ ಮತ್ತು ನೋಂದಣಿ ಶುಲ್ಕ ನಿಗದಿಪಡಿದಿದ್ದರೆ ಮತ್ತು 2014 ರಲ್ಲಿ ಪ್ರತಿ ಚದರ ಅಡಿಗೆ 8,000 ರೂಪಾಯಿ ನಿಗದಿಮಾಡಿದ್ದರೆ ಕೋಷ್ಟಕ .1 ರಲ್ಲಿ ತೋರಿಸಿರುವ ಲೆಕ್ಕ ಯಾವ ರೀತಿ ಬದಲಾಗುತ್ತದೆ ಎಂದು ಸ್ವಲ್ಪ ಗಮನ ಹರಿಸೋಣ.

                                                                 ಕೋಷ್ಟಕ - 2
2013
2014
ಮಾರುಕಟ್ಟೆ ದರ
ಕ್ರಯಪತ್ರದಲ್ಲಿ ತೋರಿಸಿದ ಮತ್ತು ನೀಡಿದ ಹಣ
ನಗದಾಗಿ ನೀಡಿದ ಕಪ್ಪು ಹಣ
ಪರಿಷ್ಕ್ರತ ಮಾರುಕಟ್ಟೆ ದರ
ಕ್ರಯಪತ್ರದಲ್ಲಿ ತೋರಿಸಿದ ಮತ್ತು ಪಡೆದ ಹಣ
ನಗದಾಗಿ ಪಡೆದ ಕಪ್ಪು ಹಣ
6,000/- ಪ್ರತಿ ಚದರ ಅಡಿ
6,00,00,000/-
000
8,000/-
8,00,00,000/-
0000
                                 
ಮುದ್ರಾಂಕ ಮತ್ತು ನೋಂದಣಿ ಶುಲ್ಕವನ್ನು 1/3 ರಷ್ಟಕ್ಕೆ ಕಡಿಮೆಮಾಡಿದಾಗ ಸರ್ಕಾರಕ್ಕೆ ಸಂದಾಯವಾಗುತ್ತಿದ್ದ ಮುದ್ರಾಂಕ ಮತ್ತು ನೋಂದಣಿ ಶುಲ್ಕ ವನ್ನು ಕಡಿಮೆ ಮಾಡದೆ ಮತ್ತು ಮಾರುಕಟ್ಟೆ ದರವನ್ನು ಎರಿಸದೆ ಇರುವಾಗ ಹೋಲಿಕೆ ಮಾಡಿದಾಗ ಈ ಕೆಳಕಂಡಂತೆ ವ್ಯತ್ಯಾಸವಾಗುತ್ತದೆ.

                                                          ಕೋಷ್ಟಕ - 3


ಸರ್ಕಾರ ನಿಗದಿ ಮಾಡಿದ್ದ ಮಾರುಕಟ್ಟೆ ದರ
ಮುದ್ರಾಂಕ ಶುಲ್ಕ ಹಳೆಯ ದರದ ಪ್ರಕಾರ (5.6%)
ನೋಂದಣಿ ಶುಲ್ಕ ಹಳೆಯ ದರದ ಪ್ರಕಾರ (1%)
ಪ್ರಸ್ತುತ ಚಾಲ್ತಿಯಲ್ಲಿದ್ದ/ ಇರುವ ಮಾರುಕಟ್ಟೆ ದರ
ಮುದ್ರಾಂಕ ಶುಲ್ಕ ನಮ್ಮ ದರದ ಪ್ರಕಾರ – 1.87%
ನೋಂದಣಿ ಶುಲ್ಕ ನಮ್ಮ ದರದ ಪ್ರಕಾರ (0.33%)
2013
2000 ರಂತೆ 2 ಕೋಟಿಗೆ
11,20,000/-
2,00,000/-
6000/- ಚದರ ಅಡಿಗೆ
11,22,000/-
1,98,000/-
2014
2200 ರಂತೆ 2.2 ಕೋಟಿಗೆ.
12.32.000/-
2,20,000/-
8000/- ಚದರ ಅಡಿಗೆ
14,96,000/-
2,64,000/-

ಮೇಲಿನ ಕೋಷ್ಟಕ -3 ನ್ನು ಪರಾಮರ್ಶಿಸಿದಾಗ ನಮಗೆ ಎರಡು ಅಂಶಗಳು ವೇದ್ಯವಾಗುತ್ತವೆ.

ಮೂದಲನೇಯದಾಗಿ, ಮುದ್ರಾಂಕ ಮತ್ತು ನೋಂದಣಿ ಶುಲ್ಕಗಳಲ್ಲಿ ಅಂತಹ ವ್ಯತ್ಯಾಸವೇನು ಆಗುವುದಿಲ್ಲ.

ಎರಡನೇಯದಾಗಿ, ಕಪ್ಪು ಹಣದ ಹೊಡಿಕೆಯನ್ನು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿ ತಡೆಯಬಹುದು.

ಮೂರನೇಯದಾಗಿ, ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಜಾಸ್ತಿ ವ್ಯವಹಾರಗಳನ್ನು ಕಾಣಬಹುದು.

 

Comments

Popular posts from this blog

Documents Required to Purchase Agricultural Land in Karnataka

STAMP DUTY FOR REGISTRATION OF SALE DEED (BANGALORE JURISDICTION PROPERTIES)

Importance of chain of title